Bhasaka
← Back to home

ಪ್ರಭುವೆನ್ನ ಅವಗುಣ ಮನದಿ

Author: ಸ್ವಾಮಿ ಹರ್ಷಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ದರಬಾರೀ ಕಾನಡಾTaala: ತ್ರಿತಾಲ
ಪ್ರಭುವೆನ್ನ ಅವಗುಣ ಮನದಿ ಧರಿಸದಿರು | ವಿಭುವೇ ಸಮದರುಶನ ತವ ಸುಗುಣವು | ಅಭಯವ ನೀಡುತ ಕೃಪೆಯಿಂ ಪಾಲಿಸು || ಲೋಹದ ವಿಗ್ರಹ ಪೂಜೆಯಲಿರ್ಪುದು ಲೋಹವದಲ್ತೆ ವ್ಯಾಧನ ಖಡ್ಗವು | ಪರುಸಮಣಿಯದೋ ಭೇದವ ಕಾಣದು ಎರಡನೂ ಸೋಂಕಲು ಕಾಂಚನವಾದುವು || ನದಿಯೆಂದೆಂಬರು ನೀರೊಂದ ಬದಿಯೆಂದೆಂಬರು ಮತ್ತೊಂದ | ಗಂಗೆಯ ಸೇರಲು ಭರದಿಂದ ಮಂಗಳವಾಗವೆ ಅದರಿಂದ || ಬೇರೆಯೆ ಜೀವನು, ಬೇರೆಯೆ ಬ್ರಹ್ಮವು ಸೂರದಾಸನದ ಒಪ್ಪುವುದಿಲ್ಲವು | ಭೇದಕೆ ಮೂಲವು ಅಜ್ಞಾನವದು ಭೇದವ ಕಾಣನು ಜ್ಞಾನಿಯು ಎಂದೂ ||

Thoughts & Reflections

0

No reflections shared yet. Be the first to share your thoughts!

Share your thought