← Back to home
ಪ್ರಭುವೆನ್ನ ಅವಗುಣ ಮನದಿ
Author: ಸ್ವಾಮಿ ಹರ್ಷಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ದರಬಾರೀ ಕಾನಡಾTaala: ತ್ರಿತಾಲ
ॐ
ಪ್ರಭುವೆನ್ನ ಅವಗುಣ ಮನದಿ ಧರಿಸದಿರು |
ವಿಭುವೇ ಸಮದರುಶನ ತವ ಸುಗುಣವು |
ಅಭಯವ ನೀಡುತ ಕೃಪೆಯಿಂ ಪಾಲಿಸು ||
ಲೋಹದ ವಿಗ್ರಹ ಪೂಜೆಯಲಿರ್ಪುದು
ಲೋಹವದಲ್ತೆ ವ್ಯಾಧನ ಖಡ್ಗವು |
ಪರುಸಮಣಿಯದೋ ಭೇದವ ಕಾಣದು
ಎರಡನೂ ಸೋಂಕಲು ಕಾಂಚನವಾದುವು ||
ನದಿಯೆಂದೆಂಬರು ನೀರೊಂದ
ಬದಿಯೆಂದೆಂಬರು ಮತ್ತೊಂದ |
ಗಂಗೆಯ ಸೇರಲು ಭರದಿಂದ
ಮಂಗಳವಾಗವೆ ಅದರಿಂದ ||
ಬೇರೆಯೆ ಜೀವನು, ಬೇರೆಯೆ ಬ್ರಹ್ಮವು
ಸೂರದಾಸನದ ಒಪ್ಪುವುದಿಲ್ಲವು |
ಭೇದಕೆ ಮೂಲವು ಅಜ್ಞಾನವದು
ಭೇದವ ಕಾಣನು ಜ್ಞಾನಿಯು ಎಂದೂ ||
Thoughts & Reflections
0No reflections shared yet. Be the first to share your thoughts!