ॐ
ಶ್ರೀಶ ಕೊಳಲನೂದಿದನಂದು ಶ್ರೀಧರನಿಂದು
ವಾಸವ ವಂದಿತ ವಾತಜ ಸೇವಿತ
ವಾಸುಕಿಶಯನನು ವಾರೆ ಸುನೋಟದಿ
ಬೆರಳ ಸಂದಿಲಿ ಮುರಳಿ ಪಿಡಿದು, ಮುರಾರಿ ತಾನು
ಹರುಷದಿಂದಲಿ ಸ್ವರವ ನುಡಿದು, ವಾರಿಜನೇತ್ರ
ಅರಳು ಮಲ್ಲಿಗೆ ಸರಗಳ ಮುಡಿದು
ಕೊರಳ ಪದಕ ಹಾರ ಕೌಸ್ತುಭ ಶೋಭಿತ
ಮರುಳು ಮಾಡುತ ಮಡದಿಯೆಲ್ಲರ ||1||
ಗೌರಿ ಗಾಂಧಾರಿ ಗೌಳಪಂತು ಗೌರೀಶ ಭೂಷಣ
ಶೌರೀ ಸಾರಂಗ ಮೋಹನವಿಂತು ಸಾವೇರಿ ಸುರುಟಿ
ಭೈರವಿ ಬ್ಯಾಗಡೆ ಊದುತ ನಿಂತು
ಮಾರಜನಕ ತಾನಾನಂದದಿಂದಲಿ
ವೀರ ಶ್ರೀ ಕೃಷ್ಣನು ವಿಧವಿಧ ರಾಗದಿ||2||
ನಾರದ ತುಂಬುರ ನಾಟ್ಯವನಾಡೆ, ನಳಿನನಾಭನ
ಗಿರಿಜಾಪತಿಯು ವಂದಿಸಿ ಬೇಡೆ, ಗೋಪಾಲಕೃಷ್ಣನ
ಭಾರತಿಪತಿ ತಾ ಕೊಂಡಾಡೆ
ವರಗುರು ವಂದಿತ ವಿಜಯವಿಠ್ಠಲರೇಯಹರುಷವ ಪಡಿಸುತ ವನಿತೆಯರೆಲ್ಲರ ||3||
Thoughts & Reflections
0No reflections shared yet. Be the first to share your thoughts!