ॐ
ಅಯ್ಯಾ, ನಿಮ್ಮ ಶರಣರ ಕೂಡಿದ
ಸುಖವನುಪಮೆಗೆ ತರಬಾರದಯ್ಯಾ.
ಅಯ್ಯಾ, ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ
ಸಾವುದೇ ಕರಲೇಸಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನರುಹಿದ ಮಹಿಮರನಗಲಿಆನು ನಿಲ್ಲಲಾರೆನಯ್ಯಾ.
Thoughts & Reflections
0No reflections shared yet. Be the first to share your thoughts!