ॐ
ಅನುತಾಪದೊಡಲಿಂದೆ ಬಂದ ನೋವನುಂಬವರು
ಒಡಲೊ, ಪ್ರಾಣವೊ, ಆರು ಹೇಳಾ
ಎನ್ನೊಡಲಿಂಗೆ ನೀನು ಪ್ರಾಣವಾದ ಬಳಿಕ
ಎನ್ನ ಒಡಲ ಸುಖ ದುಃಖವಾರ ತಾಗುವುದು ಹೇಳಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ,
ಎನ್ನ ನೊಂದ ನೋವು, ಬೆಂದ ಬೇಗೆ,ನಿಮ್ಮ ತಾಗದೆ ಹೋಹುದೆ ಅಯ್ಯಾ
Thoughts & Reflections
0No reflections shared yet. Be the first to share your thoughts!