Bhasaka
← Back to home

ಉಸುರಿನ ಪರಿಮಳವಿರಲು

Author: ಅಕ್ಕಮಹಾದೇವಿCategory: ವಚನಗಳು
ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ ?

Thoughts & Reflections

0

No reflections shared yet. Be the first to share your thoughts!

Share your thought