Bhasaka
← Back to home

ತನುವಿನ ಸತ್ವವ ನಿಲಿಸಿತ್ತು,

Author: ಅಕ್ಕಮಹಾದೇವಿCategory: ವಚನಗಳು
ತನುವಿನ ಸತ್ವವ ನಿಲಿಸಿತ್ತು, ಮನದ ವಿರಕ್ತಿಯ ಕೆಡಿಸಿತ್ತು. ಘನವ ಕಾಣಲೀಯದು ದುಃಖ. ಅರುಹಿರಿಯರ ತರಕಟ ಕಾಡಿತ್ತು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.

Thoughts & Reflections

0

No reflections shared yet. Be the first to share your thoughts!

Share your thought