Bhasaka
← Back to home

ಹಿತವಿದೆ ಸಕಲಲೋಕದ ಜನಕ್ಕೆ,

Author: ಅಕ್ಕಮಹಾದೇವಿCategory: ವಚನಗಳು
ಹಿತವಿದೆ ಸಕಲಲೋಕದ ಜನಕ್ಕೆ, ಮತವಿದೆ ಶ್ರುತಿಪುರಾಣಾಗಮದ, ಗತಿಯಿದೆ, ಭಕುತಿಯ ಬೆಳಗಿನುನ್ನತಿಯಿದೆ. ಶ್ರೀ ವಿಭೂತಿಯ ಧರಿಸಿದಡೆ ಭವವ ಪರಿವುದು ದುರಿತಸಂಕುಳವನೊರಸುವುದು ಹರನ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಲ್ಲಿರಿಸುವುದು. ನಿರುತವಿದು ನಂಬು ಮನುಜಾ, ಜನನಭೀತಿ ಈ ವಿಭೂತಿ. ಮರಣಭಯದಿಂದ ಅಗಸ್ತ್ಯ ಕಾಶ್ಯಪ ಜಮದಗ್ನಿಗಳು ಧರಿಸಿದರಂದು ನೋಡಾ. ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಒಲಿವ ವಿಭೂತಿ.

Thoughts & Reflections

0

No reflections shared yet. Be the first to share your thoughts!

Share your thought