ॐ
ಶರಣಾಗು ಶರಣಾಗು ಶರಣಾಗು ಮನವೇ
ಶ್ರೀಗುರುಚರಣ ಸರೋಜಕೆ ಮಣಿದು ||
ರಾಮಕೃಷ್ಣ ಗುರುಕೃಪೆ ನಿನಗಾದರೆ
ಹರಿವುದು ಭವಭಯ ಚಿಂತಾರುಜಿನ |
ಶ್ರೀಗುರುನಾಮದ ನೌಕೆಯು ದೊರೆತರೆ
ಭವಸಾಗರ ಯಾನವೆ ಮೋದಕರ ||
ಎಲ್ಲ ಧರ್ಮಗಳ ತಿರುಳನು ಸಾರುವ
ನೊಂದ ಜೀವರಿಗೆ ಭರವಸೆಯೀಯುವ |
ರಾಮಕೃಷ್ಣ ಸಂದೇಶ ಗೀತೆಯ
ಸಾಗರದಲೆಗಳು ಹಾಡುತಿವೆ ||
ಭವ್ಯ ಹಿಮಾಲಯ ಪರ್ವತರಾಜಿಯು
ಮುಳುಗಿರೆ ಧ್ಯಾನ ಸಮಾಧಿಯಲಿ |
ರಾಮಕೃಷ್ಣ ಜಯ ರಾಮಕೃಷ್ಣ ಜಯ
ಎಂಬೀ ನಿನದವು ಕೇಳುತಿದೆ ||
Thoughts & Reflections
0No reflections shared yet. Be the first to share your thoughts!