Bhasaka
← Back to home

ಉತ್ತಿಷ್ಠತ ಜಾಗ್ರತ

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಮಿಶ್ರ ಸಾರಂಗTaala: ತ್ರಿತಾಲ
ಉತ್ತಿಷ್ಠತ ಜಾಗ್ರತ | ಮನುಜ || ಗುರಿಯನು ಸೇರುವವರೆಗೂ | ನೀ ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ || ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೆಯೆ ಇದೆ ಆ ರತುನ | ಬನ್ನಪಡುತ ಈ ಕ್ಷುದ್ರ ಜೀವನದಿ ಇನ್ನು ತೊಳಲದಿರು ಮುನ್ನಡೆ ಸಖನೇ || ಮಮತೆಯ ಈ ದೇಹವೆ ನೀನೆಂದು ಭ್ರಮಿಸದಿರೈ ನೀ ಎಂದೆಂದೂ | ಅಮರ ಆತ್ಮನೀ ಅಮೃತಪುತ್ರನೇ ಅಮಲಾನಂದದಿ ಪರಿಪೂರ್ಣನು ನೀ ||

Thoughts & Reflections

0

No reflections shared yet. Be the first to share your thoughts!

Share your thought