← Back to home
ಮನವೆನ್ನ ಮಾತು ಕೇಳದು ಮಂದಜ್ಞಾನದಿ
Author: ಪುರಂದರದಾಸCategory: ಶ್ರೀಕೃಷ್ಣRaaga: ಪೂರಿಯಾಧನಾಶ್ರೀTaala: ತ್ರಿತಾಲ
ॐ
ಮನವೆನ್ನ ಮಾತು ಕೇಳದು ಮಂದಜ್ಞಾನದಿ
ತನುವಿನಾಸೆಯು ಬಿಡಲೊಲ್ಲದು ॥
ದೇಹ ಸಂಬಂಧಿಗಳಾದವರೈವರು
ಮೋಹಪಾಶದಿ ಕಟ್ಟಿ ಬಿಗಿದಿಹರೈ
ದೇಹವನಿತ್ಯವೆಂಬುವ ಗುರುತರಿಯದೆ
ಮಾಯಾ ಪ್ರಪಂಚವು ಬದ್ಧವಾಗಿದೆ ॥
ಸಾಧುಸಜ್ಜನರ ಸಂಗವ ಮಾಡಿ ಪರಗತಿಗೆ
ಆಧಾರವನು ಮಾಡಲೊಲ್ಲದಯ್ಕಾ
ಕ್ರೋಧ ಕುಹಕ ದುಷ್ಪರೊಡನಾಡಿ ಕಾಲನ
ಬಾಧೆಗೆ ಗುರಿಯ ಮಾಡುತಲಿದೆ ಹರಿಯೆ ॥
ಮದಗಜ ಮೈಯ ಮರೆತು ಮುಂದುಗಾಣದೆ
ಕದುವಿನೊಳಗೆ ಬಿದ್ದಂತಾಯಿತಯ್ಯ್ಕಾ
ಹೃದಯ ಕಮಲದಲ್ಲಿ ನಿಂತು ರಕ್ಷಿಸೋ ಎನ್ನ
ಪದುಮಾಕ್ಷ ವರದ ಶ್ರೀ ಪುರಂದರವಿಟ್ಕಲ ||
Thoughts & Reflections
0No reflections shared yet. Be the first to share your thoughts!