Bhasaka
← Back to home

ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ

Author: ಸ್ವಾಮಿ ಹರ್ಷಾನಂದCategory: ಶ್ರೀರಾಮಕೃಷ್ಣRaaga: ಕಾನಡಾTaala: ಝಂಪೆತಾಳ
ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ ಹೇ ರಾಮಕೃಷ್ಣ ಕೃಪೆ ತೋರು ಒಮ್ಮೆ ॥ ನೀ ರಾಮನಂತೆ ನೀ ಕೃಷ್ಣನಂತೆ ನೀ ರುದ್ರ ನೀ ಬ್ರಹ್ಮ ಎನುತಿಹರು ಭಕುತರು॥ ಪತಿತಪಾವನನಂತೆ ಭಕ್ತವತ್ಸಲನಂತೆ ಯೋಗಿಗಳ ಜ್ಞಾನಿಗಳ ಪರಮಗುರಿ ನೀನಂತೆ ॥ ಅಂಥವರು ಇಂಥವರು ರಾಮಕೃಷ್ಣರು ಎಂದು ಮನವು ಬಂದಂತೆಲ್ಲಾ ಹೊಗಳುತಿದೆ ಜನವೃಂದ ॥ ಎನಗಿತ್ತ ದರುಶನವೆ ಉಳಿಸಬಲ್ಲದು ನಿನ್ನ ' ಮಾನವನು ಕೀರ್ತಿಯನು ಉಳಿದೆಲ್ಲ ಬಿರುದುಗಳನು ॥ ದಯತೋರಿ ಬಂದೊಮ್ಮೆ ನಲಿದಾಡಿ ಕಣ್ಮುಂದೆ ನೀ ಎನ್ನ ಜೀವನವ ಪೂರ್ಣವಾಗಿಸು ತಂದೆ! ॥

Thoughts & Reflections

0

No reflections shared yet. Be the first to share your thoughts!

Share your thought