Bhasaka
← Back to home

ಯಾರಿಗೆ ಯಾರುಂಟು ಎರವಿನ ಸಂಸಾರ

Author: ಪುರಂದರದಾಸCategory: ವೈರಾಗ್ಯRaaga: ಮಾಂಡ್Taala: ತ್ರಿತಾಲ
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ॥ ಬಾಯಾರಿತು ಎಂದು ಬಾವಿ ನೀರಿಗೆ ಪೋದೆ ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೇ ॥ ಬಿಸಿಲುಗಾಳಿಗಾಗಿ ಮರದ ಛಾಯೆಗೆ ಪೋದೆ ಮರ ಬಗ್ಗಿ ಶಿರದ ಮೇಲೊರಗಿತು ಹರಿಯೇ ॥ ತಂದೆ ಶ್ರೀಪುರಂದರ ವಿಟ್ಠಲ ನಾರಾಯಣ ನಾ ಹೋಗೋ ಹೊತ್ತಿಗೆ ನೀ ಕಾಯೋ ಹರಿಯೇ ॥

Thoughts & Reflections

0

No reflections shared yet. Be the first to share your thoughts!

Share your thought