← Back to home
ಸಪ್ತಋಷಿ ಭುವನದಿಂದ
Author: ಸ್ವಾಮಿ ತದ್ರೂಪಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಸಿಂಧುಭೈರವೀTaala: ಕವಾಲೀ
ॐ
ಸಪ್ತಋಷಿ ಭುವನದಿಂದ
ಇಳೆಗಿಳಿದು ಬಂದ |
ಶ್ರೀಗುರುದೇವನ ಕಂದ
ವಿವೇಕಾನಂದ ||
ತ್ಯಾಗವಿರಾಗದ ಕಡಲು
ಭೋಗಗಳ ಸಿಡಿಲು |
ಜಗಜನರಿಗೆ ತಾಯ್ಮಡಿಲು
ಹರನ ನರನೊಡಲು ||
ಆತ್ಮಜ್ಞಾನದ ಕಾಂತಿ
ಮೋಹದುಪಶಾಂತಿ |
ಬಳಲಿದರಿಗೆ ವಿಶ್ರಾಂತಿ
ನೀಗಿರುವೆ ಭ್ರಾಂತಿ ||
ಮಿರುಗುವ ವಿದ್ಯಾಸೂರ್ಯ
ನಿಸ್ಸಿಮವೀರ್ಯ |
ಮೇರೆಯ ಅರಿಯದ ಧೈರ್ಯ
ಎಸಗೆ ಗುರುಕಾರ್ಯ ||
Thoughts & Reflections
0No reflections shared yet. Be the first to share your thoughts!