ॐ
ಗಂಭೀರ ಗಜವದನ ಗಣನಾಥ ಸುಖಸದನ
ಗೌರೀತನೂಭವನ ಗೈವೆ ಪುಣ್ಯಸರಣ ॥
ವಿದ್ಯಾಬುದ್ದಿ ವಿದಾತ ವೇದಾಗಮಾತೀತ
ಆದಿಪೂಜ್ಯ ಪ್ರಶಾಂತ ಮೋದಕಪ್ರಿಯ ವಿನುತ ॥
ನಿತ್ಯ ಸತ್ಯ ಸತೇಜ ಪ್ರಥಮಾಶ್ರಮವಿರಾಜ
ನುತಪಾಲ ಗುಣ ಸಹಜ ಕ್ಷಿತಿಗೊಡೆಯ ಗಣರಾಜ ॥
ಕರಪಿಡಿದು ನಡೆಸೆನ್ನ ಹರತನುಜ ವರಗಣಪ
ಉರಗಾಚಲನ ಸಿರದಿ ಕರವಿರಿಸಿ ಪೊರೆ ದೇವ ॥
Thoughts & Reflections
0No reflections shared yet. Be the first to share your thoughts!