ॐ
ಸಿರಿ ವಾಣಿ ಗೌರಿ ಹೇ ಶಾರದಾಂಬೆ
ಸೂತ್ರಧಾರಿಣಿ ಜಗವೇ ಬೊಂಬೆ ||
ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ
ಪರಾಶಕ್ತಿ ಪರಮೇಶ್ವರದಯಿತೇ ||
ದಯಾಸಾಗರೇ ರಕ್ಷಿಸು ಎನ್ನನು
ಸ್ಮಯದಿಂ ಭಯದಿಂ ದೂಷಿತಶಿಶುವನು |
ಭವಸಾಗರದಿಂ ಕಾಪಿಡು ಜನರನು
ಅವನೀಕುವರಿ ನೀಡುತ ಕರವನು ||
Thoughts & Reflections
0No reflections shared yet. Be the first to share your thoughts!