Bhasaka
← Back to home

ರಾಮಕೃಷ್ಣದಿಗಂತದಲಿ

Author: ಹೆಚ್ ಎನ್ ಮುರಳೀಧರCategory: ಶ್ರೀಸ್ವಾಮಿ ವಿವೇಕಾನಂದRaaga: ಭೂಪಾಲೀTaala: ದಾದರಾ
ರಾಮಕೃಷ್ಣದಿಗಂತದಲಿ ಅರುಣಕಿರಣ ಹೊಮ್ಮಲು ಮೂಡಿಬಂದ ತ್ಯಾಗರವಿಯೆ ಬೆಳಕ ಹರಡಿ ಸುತ್ತಲು | ಗುರುವಿನಡಿಯೆ ಮಲ್ಲಸಾಲೆ- ಶಿಲೆಯು ಶಿಲ್ಪವಾಯಿತು; ನೂರು ಪ್ರಶ್ನೆ ಕರಗಿ ಉರಿದು ಜ್ಯೋತಿ ಜಗವ ತುಂಬಿತು | ಉತ್ಸವರಥವೇರಿ ಜಗವ ಸುತ್ತಿಬಂದ ಸ್ಫೂರ್ತಿಯೇ; ಶ್ರೀಗುರುವಿನ ಧವಳಕೀರ್ತಿ- ಧ್ವಜವ ಮೆರೆದ ಮೂರ್ತಿಯೆ | ಎನ್ನೆದೆಯೊಳು ಉದಯಿಸಿಂದು, ಕಾಳರಾತ್ರಿ ಕಳೆಯಲಿ; ಕಿರಣಜಲದಿ ಜೀವ ನೆನೆದು ಪುಳಕಾಂಕುರ ಬೆಳೆಯಲಿ |

Thoughts & Reflections

0

No reflections shared yet. Be the first to share your thoughts!

Share your thought